
ಶಿವಮೊಗ್ಗ : ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮಂಜುನಾಥ್ ರಾವ್ ರವರನ್ನು ಕೊಂದು ತಮ್ಮ ರಾಕ್ಷಸತನವನ್ನು ತೋರಿಸಿದ್ದಾರೆ ಎಂದು ಜಿಲ್ಲಾಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಹೇಳಿದರು.
ಸ್ಕೌಟ್ಸ್ ಅಂಡ್ ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ವತಿಯಿಂದ ಭಾನುವಾರ ಸಂಜೆ ನೇತಾಜಿ ವೃತ್ತದಿಂದ ಕ್ಯಾಂಡಲ್ ಮಾರ್ಚ್ ಮಾಡುವುದರೊಂದಿಗೆ ಅವರ ಮನೆಯವರೆಗೆ ತೆರಳಿ ಮೃತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತ ಪತ್ನಿ ಪಲ್ಲವಿ ಹಾಗೂ ಮಗನಿಗೆ ಸಾಂತ್ವಾನದ ನುಡಿಗಳನ್ನು ಹೇಳಿ ಧೈರ್ಯ ತುಂಬಿದರು.
ಪತ್ನಿ ಪಲ್ಲವಿ ಮತ್ತು ಮಗ ಅಭಿಜಯ್ ಮುಂದೆಯೇ ಪತಿ ಮಂಜುನಾಥ್ ನನ್ನು ಕೊಂದು ಭಯೋತ್ಪಾದಕರ ವಿರುದ್ಧ ಧ್ಯೇರ್ಯ ತೋರಿ ಮಾತನಾಡಿದ್ದೀರಿ, ಮುಂಚಿನ ದಿನಗಳು ಸಂತೋಷದಿಂದ ಕಳೆದ ದಿನಗಳಾಗಿದ್ದವು, ನಿಮ್ಮ ಎದುರು ಗುಂಡಿಟ್ಟು ಕೊಲ್ಲುವಾಗ ಅಲ್ಲೆ ಇದ್ದೀರಿ, ಇಂತಹ ದಿನ ಬರುತ್ತದೆ ಎಂದು ನೀವು ಯಾರು ಊಹಿಸಿರಲಿಲ್ಲ, ದೇವರು ನಿಮ್ಮ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನುಡಿದರು.
ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ.ವಿಜಯಕುಮಾರ್ ಮಾತನಾಡಿ, ಕಾಶ್ಮೀರದಲ್ಲಿ ಭಯೋತ್ಪಾದಕರು ರಾಕ್ಷಸತನದಿಂದ ಅಟ್ಟ ಹಾಸ ಮೆರೆದಿದ್ದಾರೆ. ಶಿವಮೊಗ್ಗದ ಮಂಜುನಾಥ್ ನನ್ನು ಗುಂಡಿಟ್ಟು ಕೊಂದು ಹಾಕಿದ್ದಾರೆ. ಭಯೋತ್ಪಾದಕರ ವಿರುದ್ಧದ ಹೋರಾಟ ಇನ್ನಷ್ಟು ತೀವ್ರಗೊಳಿಸಿ ದೇಶದಲ್ಲಿ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುವ ಅವಶ್ಯಕತೆಯಿದೆ ಎಂದ ಅವರು, ಮಂಜುನಾಥ್ ಪತ್ನಿ ಪಲ್ಲವಿ ಹಾಗೂ ಮಗ ಅಭಿಜಯ್ ಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಮಯದಲ್ಲಿ ರೋವರ್ ವಿಭಾಗದ ಜಿಲ್ಲಾ ಆಯುಕ್ತರಾದ ಕೆ.ರವಿ, ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಶೇಖರಯ್ಯ.ಕೆ.ವಿ, ಮಲ್ಲಿಕಾರ್ಜುನ ಕಾನೂರು, ಲಕ್ಷ್ಮೀ ರವಿ, ಚಂದ್ರಶೇಖರ್, ಕೃಷ್ಣಸ್ವಾಮಿ, ಕಾತ್ಯಾಯಿನಿ, ಮೀನಾಕ್ಷಮ್ಮ, ನಾಗರಾಜ್, ಶಿವಮೊಗ್ಗ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ರಾಜೇಶ್.ಎ.ವಿ, ಸ್ಕೌಟ್ ಮತ್ತು ಗೈಡ್ಸ್, ಹಾಗೂ ರೋವರ್ಸ್ ಮತ್ತು ನಳಿನಿ ಐತಾಳ್. ರೆಂಜರ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.