
ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ ಅವರ ಪಾರ್ಥೀವ ಶರೀರ ಅವರ ಮನೆ ವಿಜಯನಗರಕ್ಕೆ ಬಂದಿದ್ದು ಮನೆಯ ಮುಂದೆ ಪಾರ್ಥೀವ ಶರೀರ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಅವರ ಪಾರ್ಥೀವ ಶರೀರ ವೀಕ್ಷಿಸಲು ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ.
ಮನೆಯ ಒಳಗೆ ಮಂಜುನಾಥ ಅವರ ಪಾರ್ಥೀವ ಶರೀರಕ್ಕೆ ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ಮುಗಿಸಿ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೊಳೆ ಬಸ್ ನಿಲ್ದಾಣದಿಂದ ಪಾರ್ಥೀವ ಶರೀರವನ್ನ ಮಂಜುನಾಥ ಮನೆಯ ತನಕ ಬೈಕ್ ರ್ಯಾಲಿ ಮೂಲಕ ತರಲಾಯಿತು.
ಭಯೋತ್ಪದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೆ ದಿಕ್ಕಾರ, ಅಮರ್ ರಹೇ.. ಅಮರ್ ರಹೇ ಮಂಜುನಾಥ್ ಅಮರ್ ರಹೇ ಎಂಬ ಘೋಷಣೆ ಮಂಜುನಾಥ್ ಅವರ ಮನೆಯ ಮುಂದೆ ಜಮಾವಣೆಗೊಂಡ ಸಾರ್ವಜನಿಕರು ಘೋಷಣೆ ಕೂಗಿದರು.
ಮಾಜಿ ಡಿಸಿಎಂ ಈಶ್ವರಪ್ಪ – ಪಾಕಿಸ್ತಾನಕ್ಕೆಸಿಂಧೂ ನದಿ ನೀರು ಕೊಡಲ್ಲ ಎಂದು ಪ್ರಧಾನಿ ನಿರ್ಧಾರ ಕೈಗೊಂಡಿದ್ದಾರೆ. ನಮ್ಮ ಋಣದಲ್ಲಿ ಪಾಕಿಸ್ತಾನವಿದೆ. ಕೇಂದ್ರದ ತೀರ್ಮಾನ ಸರಿಯಾಗಿದೆ.