Saturday, May 24, 2025
Google search engine
HomeArchiveಆತ್ಮಬಲದ ಅತ್ಯತ್ಕೃಷ್ಠ ಅಭಿವ್ಯಕ್ತಿ ಅಕ್ಕ: ಶ್ರೀಬಸವ ಮರುಳಸಿದ್ದ ಸ್ವಾಮೀಜಿ

ಆತ್ಮಬಲದ ಅತ್ಯತ್ಕೃಷ್ಠ ಅಭಿವ್ಯಕ್ತಿ ಅಕ್ಕ: ಶ್ರೀಬಸವ ಮರುಳಸಿದ್ದ ಸ್ವಾಮೀಜಿ

ಶಿವಮೊಗ್ಗ: ಅತೀ ಸಂಪ್ರದಾಯಬದ್ದವಾದ ಸಮಾಜದ ಕಟ್ಟುಪಾಡುಗಳ ನಡುವೆ ದಿಂಗಂಬರವನ್ನೇ ದಿವ್ಯಾಂಬರ ಮಾಡಿಕೊಂಡು ನಡೆದವರು ಅಕ್ಕಮಹಾದೇವಿ ಎಂದು ಶ್ರೀ ಬಸವತತ್ವ ಪೀಠ ಚಿಕ್ಕಮಗಳೂರು, ಬಸವಕೇಂದ್ರ ಶಿವಮೊಗ್ಗದ ಶ್ರೀ ಮ.ನಿ.ಪ್ರ. ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಅಕ್ಕನ ಈ ನಡೆ ಅಂದಿನ ಕೆಲವರಿಗೆ ವಿಲಕ್ಷಣವೆನಿಸಿದರೂ, ಇಂದು ನಿಂತು ನೋಡಿದರೆ, ಯಾವುದೇ ವ್ಯಕ್ತಿಯ ಆತ್ಮಬಲದ ಅತ್ಯತ್ಕೃಷ್ಠ ಅಭಿವ್ಯಕ್ತಿಯಾಗಿ ಕಾಣುತ್ತದೆ. ಅಕ್ಕಮಹಾದೇವಿ ಮೇರು ಕವಿಯತ್ರಿ, ಮಹಾನುಭಾವಿ, ಅಪ್ರತಿಮ ವಿರಾಗಿ. ಏಕಾಂತವ ಬಯಸಿದ ಅಕ್ಕ ಚೆನ್ನಮಲ್ಲಿಕಾರ್ಜುನನ ಕೂಡುವ ಹಂಬಲದೊಂದಿಗೆ ಲೋಕ ಸಂಚಾರಿಯಾದ ಜಂಗಮ ಮೂರ್ತಿಯಾಗುತ್ತಾಳೆ. ಹಾಗಾಗಿ ಅಕ್ಕನ ವಚನಗಳಲ್ಲಿ ಲೋಕಾನುಭವದ ಮೂಸೆಯಲ್ಲಿ ಫಲಿತಗೊಂಡ ಶಿವಾನುಭವವನ್ನು ಕಾಣುತ್ತೇವೆ.
ಲೋಕದ ಗಂಡರನ್ನಷ್ಟೇ ಅಲ್ಲದೇ, ಲೋಕದ ಜಂಜಡಗಳನ್ನೆಲ್ಲ ಒಲೆಯೊಳಗಿಕ್ಕಿ ಭಸ್ಮವ ಧರಿಸಿ ವೈರಾಗ್ಯದ ಮೇರುವಾದ ಅಕ್ಕನ ಬದುಕು ಯಾರಿಗಾದರೂ ಸೋಜಿಗವೆನಿಸುತ್ತದೆ ಎಂದರು.

ಅಕ್ಕನ ಅರಿವು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಚಿಕ್ಕಮಗಳೂರು ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆ ಸದಸ್ಯರಾದ ಈ ಪ್ರೇಮಾ ಅವರು, ಹೆಣ್ಣು ಕೇವಲ ಭಾವ ಜೀವಿ ಅಲ್ಲ. ಸಮಸ್ತ ಸಮಾಜಕ್ಕೆ ಹೂವ ತರುವ ಶಕ್ತಿವಂತೆ. ಇಡೀ ಜಗತ್ತಿನ ಮನುಕುಲಕ್ಕೆ ಬೆಳಕು ಬೀರುವ ಶಕ್ತಿ ಅಕ್ಕ ತೋರಿದ ಹಾದಿಯಲ್ಲಿದೆ. ಈ ದಾರಿಯ ಬೆಳಕಿನಲ್ಲಿ ನಾವು ಸಾಗಬೇಕಿದೆ. ಮಹಿಳಾ ಸಂವೇದನೆಗೆ ಭಾಷ್ಯ ಬರೆದವರು ಅಕ್ಕಮಹಾದೇವಿ. ಮಹಿಳೆಯರ ತಲ್ಲಣ, ಸಂಕಟ, ನೋವುಗಳು ಜಾಗತಿಕ. ಜಗತ್ತಿನ ಯಾವುದೇ ಸಮಾಜದಲ್ಲಿ ಮಹಿಳೆಯರು ಇಂದಿಗೂ ಮುಕ್ತವಾಗಿ ತಮ್ಮ ಅಭಿಪ್ರಾಯ ಅಭಿವ್ಯಕ್ತಿಗೆ ಮುಕ್ತ ಅವಕಾಶವಿಲ್ಲ. ಆದರೆ, ಅಕ್ಕ‌ಮಹಾದೇವಿ 12ನೇ ಶತಮಾನದಲ್ಲೇ ತನ್ನ ಅಭಿಪ್ರಾಯವನ್ನು ದಿಟ್ಟವಾಗಿ ವ್ಯಕ್ತಪಡಿಸಿದವಳು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತರಾದ ಉಪನ್ಯಾಸಕ ಡಾ. ಕಲೀಮ್ ಉಲ್ಲಾ ಹಾಗೂ 2024ರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ ಅವರನ್ನು ಅಭಿನಂದಿಸಲಾಯಿತು.

ಬಸವಕೇಂದ್ರದ ಅಧ್ಯಕ್ಷರಾದ ಬೆನಕಪ್ಪ ವೇದಿಕೆಯಲ್ಲಿ ಇದ್ದರು. ಉಪಾಧ್ಯಕ್ಷರಾದ ಚಂದ್ರಪ್ಪ ಸ್ವಾಗತಿಸಿದರು. ಲವಕುಮಾರ್ ನಿರೂಪಿಸಿದರು.

RELATED ARTICLES
- Advertisment -
Google search engine

Most Popular

Recent Comments