Monday, May 19, 2025
Google search engine
HomeUncategorizedನ.24: ಸಿರಿ ಬುತ್ತಿ ಸಿರಿಧಾನ್ಯ ಆಹಾರ ಸ್ಪರ್ಧೆ

ನ.24: ಸಿರಿ ಬುತ್ತಿ ಸಿರಿಧಾನ್ಯ ಆಹಾರ ಸ್ಪರ್ಧೆ

ಶಿವಮೊಗ್ಗ : ನ್ಯಾಷನಲ್ ಲಿಂಗಾಯತ ಯೂತ್ ಫೋರಂ (ILYF ) ಹಾಗೂ ವೀರಶೈವ ಯುವ ಸಂಗಮ (ರಿ) ಮತ್ತು ಬಸವಕೇಂದ್ರ ಶಿವಮೊಗ್ಗ ಇವರಿಂದ ILYF ಪರಿಚಯ ಕಾರ್ಯಕ್ರಮ ಹಾಗೂ ‘ ಮಹಾ ಸಂಗಮ ಸಿರಿ ಬುತ್ತಿ – ಸಿರಿಧಾನ್ಯ ಆಹಾರ ಸ್ಪರ್ಧೆಯನ್ನು ನ.24 ರಂದು ಮಧ್ಯಾಹ್ನ 2.00 ಗಂಟೆಗೆ ಆಯೋಜಿಸಲಾಗಿದೆ ಎಂದು ಮಹಾದೇವ್ ಪ್ರಸಾದ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿರಿಧಾನ್ಯ ಅಡುಗೆ ಸ್ಪರ್ಧೆಯನ್ನು ಶಿವಮೊಗ್ಗದ ಬಸವಕೇಂದ್ರದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಮಹಿಳೆ ಹಾಗೂ ಸಂಘ ಸಂಸ್ಥೆಗಳು ಭಾಗವಹಿಸಿದರೆ, ಪ್ರತ್ಯೇಕ ಬಹುಮಾನ ಇರುತ್ತದೆ. ನ.23 ರ ಸಂಜೆ 8.00 ಯೊಳಗೆ ಸ್ಪರ್ಧೆಗೆ ಹೆಸರು ನೋಂದಾಯಿಸಲು ಮುಕ್ತ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊ.ನಂ. 9448211881/9448139228 ಸಂಪರ್ಕಿಸಬಹುದಾಗಿದೆ ಎಂದರು.

ಪ್ರಪಂಚದಾದ್ಯಂತ ಇರುವ ಲಿಂಗಾಯತ ಸಮುದಾಯದವರೆಲ್ಲರ ಏಳಿಗೆಗಾಗಿ, ತುಂಬಾ ಕ್ರಿಯಾಶೀಲವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದಾದ ಒಂದು ಉಪಯುಕ್ತ ವೇದಿಕೆ ILYF! ವಿವಿಧ ವೃತ್ತಿ ಹಿನ್ನೆಲೆಯ, ಸಕಲರನ್ನು ಒಳಗೊಳ್ಳುವ, ಶರಣ ಶರಣೆಯರ ಸದೃಢ ಸಮುದಾಯವನ್ನು ಒಂದೆಡೆ ಸೇರಿಸುವ ದೂರದೃಷ್ಟಿ ಐಲೈಫ್ ಗೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ವಿಜಯ್ ಕುಮಾರ್, ಸುರೇಶ್.ಎಂ.ಆರ್, ವಿಶ್ವೇಶ್ವರಯ್ಯ, ಗಣೇಶ್ ಅಂಗಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments