Thursday, January 16, 2025
Google search engine
Homeಇ-ಪತ್ರಿಕೆಜೂ.24ರಂದು ರಾಷ್ಟ್ರ ಮಟ್ಟದ ಸಮಾವೇಶ: ಚಂದ್ರಬಾಬು, ನಿತೀಶ್ ಜೊತೆಗೂಡಿ ಹೋರಾಟ; ರೈತಸಂಘ

ಜೂ.24ರಂದು ರಾಷ್ಟ್ರ ಮಟ್ಟದ ಸಮಾವೇಶ: ಚಂದ್ರಬಾಬು, ನಿತೀಶ್ ಜೊತೆಗೂಡಿ ಹೋರಾಟ; ರೈತಸಂಘ

 ದಾವಣಗೆರೆ/ಶಿವಮೊಗ್ಗ: ದೇಶದಲ್ಲಿ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ರಾಷ್ಟ್ರ ಮಟ್ಟದ ಚಿಂತನ–ಮಂಥನ ಸಮಾವೇಶವನ್ನು ಇದೇ ಜೂನ್‌ 24 ರಂದು 11 ಗಂಟೆಗೆ ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ ಎಂದು ರೈತ ಮುಖಂಡ
ಬಲ್ಲೂರು ರವಿಕುಮಾರ್‌ ತಿಳಿಸಿದ್ದಾರೆ.

 ಭವಿಷ್ಯದಲ್ಲಿ ದಕ್ಷಿಣ ಭಾರತದಲ್ಲಿ ರೈತ ಹೋರಾಟವನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯದ ರೈತ ಮುಖಂಡರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ ರಾಷ್ಟ್ರೀಯ ಮಟ್ಟದ ರೈತ ಮುಖಂಡರ ನಿಯೋಗ  ಕೇಂದ್ರ ಸರ್ಕಾರದ ಪಾಲುದಾರ ಪಕ್ಷಗಳ ಮುಖಂಡರಾದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೆಂಬಲದೊಂದಿಗೆ  ಕೇಂದ್ರದ ವಿರುದ್ಧ
ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆವಿಮೆ ನೀತಿ ಬದಲಾಯಿಸಿ ಪ್ರತಿ ರೈತನ ಹೊಲದ ಬೆಳೆ ವಿಮೆ ಜಾರಿ ತರಬೇಕು ಬರಗಾಲ ಅತಿವೃಷ್ಟಿ ಮಳೆ ಹಾನಿ, ಪ್ರವಾಹ ಹಾನಿ ಪ್ರಕೃತಿ ವಿಕೋಪದ ಹಾನಿ ಬೆಳೆ
ನಷ್ಟ ಪರಿಹಾರದ ಎನ್.ಡಿ.ಆರ್.ಎಫ್. ಮಾನದಂಡ ತಿದ್ದುಪಡಿ ಮಾಡಬೇಕು. ರೈತರ ಸಾಲ ತಿರುವಳಿ, ಓ.ಟಿ.ಎಸ್. ಸಾಲ ಮೇಳ ನಡೆಸಿ ಹೊಸ ಸಾಲ ವಿತರಿಸಬೇಕು. ಕಳಪೆ ರಸಗೊಬ್ಬರ ಕೀಟನಾಶಕ ಬಿತ್ತನೆ ಬೀಜ ಮಾರಾಟ ಮಾಡುವ ಮಾರಾಟಗಾರರಿಗೆ ಜಾಮೀನು ರಹಿತ ಬಂಧನ ಮಾಡುವ ಕಠಿಣ ಕಾನೂನು ಜಾರಿಗೊಳಿಸಬೇಕು ಎಂಬುದ ಸೇರಿದಂತೆ ಮುಂತಾದ ವಿಷಯಗಳ ಕುರಿತು ಸಮಗ್ರ ಚಿಂತನ ಮಥನ ಸಮಾವೇಶದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ರೈತ ಮುಖಂಡರ ರಾಷ್ಟ್ರೀಯ ಸಮಾವೇಶದಲ್ಲಿ ಜಗಜಿತ್ ಸಿಂಗ್ ದಲೆವಾಲಾ, ಎ.ಕೆ.ಎಂ ಪಂಜಾಬ್ ಲಕ್ವಿನ್ಧರ್ ಸಿಂಗ್, ಹರಿಯಾಣ ಎಸ್.ಕೆ.ಎಂ. ದಕ್ಷಿಣ ಭಾರತ ಸಂಚಾಲಕ ಕುರುಬೂರು ಶಾಂತಕುಮಾರ್. ಅಭಿಮನ್ಯು ಕೋಹರ ಹರಿಯಾಣ, ಕೆ.ವಿ. ಬಿಜು ಕೇರಳ, ಪಿ.ಆರ್.ಪಾಂಡೆನ್
ತಮಿಳುನಾಡು, ರಾಮನಗೌಂಡರ್ ತಮಿಳುನಾಡು, ವೆಂಕಟೇಶ್ವರ ರಾವ್ ತೆಲಂಗಾಣ, ನರಸಿಂಹ ನಾಯ್ಡು ಆಂಧ್ರ ಪ್ರದೇಶ, ಇನ್ನು ಮುಂತಾದ ಬೇರೆ ಬೇರೆ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರುಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸುತ್ತಿದ್ದಾರೆ ಎಂದು
ತಿಳಿಸಿದ್ದಾರೆ.

 ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಈ ಸಮಾವೇಶವನ್ನು ಆಯೋಜಿಸಿದ್ದು ರೈತ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments