ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪ್ರಖ್ಯಾತ ನಟರಾದ ಸುದೀಪ್, ಉಪೇಂದ್ರ ಮತ್ತು ನಟಿ ರಮ್ಯಾ ಪ್ರತಿಕ್ರಿಯೆ ಕೊಟ್ಟ ನಂತರ ನಟಿ ಶ್ರೀಲೀಲಾ ಈ ಕುರಿತು ಹೇಳಿಕೆಯನ್ನು ನೀಡಿದ್ದಾರೆ..
ಬಳ್ಳಾರಿಯಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯಯವರ ಜೊತೆ ನಟಿ ಶ್ರೀಲೀಲಾ ಕೂಡ ಯೋಗ ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ನಟಿ ಮಾತನಾಡಿದರು. ಈ ಸಂದರ್ಭದಲ್ಲಿ ದರ್ಶನ್ ಪ್ರಕರಣಕ್ಕೆ ಕುರಿತು ಪ್ರಶ್ನೆಯೊಂದನ್ನು ಉತ್ತರಿಸಿದ ಅವರು, ಏನನ್ನೂ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ.
ಸದ್ಯ ತೆಲುಗು ನಟರಾದ ನಿತಿನ್ ಮತ್ತು ರವಿತೇಜ ಜೊತೆ ನಟಿಸುತ್ತಿದ್ದಾರೆ. ಹಿಂದಿಯ ಸೈಫ್ ಅಲಿ ಖಾನ್ ಪುತ್ರನಿಗೂ ಶ್ರೀಲೀಲಾ ನಾಯಕಿಯಾಗಿದ್ದಾರೆ.