Monday, January 13, 2025
Google search engine
Homeಇ-ಪತ್ರಿಕೆಭಾನು ಪ್ರಕಾಶ್‌ ನುಡಿ ನಮನ ಕಾರ್ಯಕ್ರಮ: ಯಡಿಯೂರಪ್ಪ ಭಾಗಿ

ಭಾನು ಪ್ರಕಾಶ್‌ ನುಡಿ ನಮನ ಕಾರ್ಯಕ್ರಮ: ಯಡಿಯೂರಪ್ಪ ಭಾಗಿ

ಶಿವಮೊಗ್ಗ: ಅಗಲಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರು ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ  ಭಾನುಪ್ರಕಾಶ್ ಅವರ ನುಡಿ “ನಮನ ಕಾರ್ಯಕ್ರಮ” ದಲ್ಲಿ ಪಾಲ್ಗೊಂಡು ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿದ್ದರು.

ಇದೇ ಸಮಯದಲ್ಲಿ ಪಕ್ಷದ ಸಂಘಟನೆಗಾಗಿ ಅವರು ಸಲ್ಲಿಸಿದ ಅಪಾರ ಸೇವೆಯನ್ನು ನೆನಪು ಮಾಡಿಕೊಳ್ಳಲಾಯಿತು. ಸಾವಿರಾರು ಕಾರ್ಯಕರ್ತರಿಗೆ ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಣೆ ನೀಡಿದ್ದನ್ನು ಸ್ಮರಿಸಿಕೊಳ್ಳಲಾಯಿತು. ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಪಕ್ಷವನ್ನು ವಿಸ್ತರಿಸಲು ಶ್ರಮಿಸಿದ ರೀತಿಯನ್ನು ಮುಕ್ತವಾಗಿ ತೆರೆದಿಡಲಾಯಿತು. ಎಲ್ಲ ಸಮಯದಲ್ಲಿಯೂ ಸೂಕ್ತ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನ ಮಾಡಿದ ಸಂದರ್ಭವನ್ನು ಮನಸ್ಸಿನ ಮಾತಿನ ಮೂಲಕ ತೋರ್ಪಡಿಸಲಾಯಿತು.

RELATED ARTICLES
- Advertisment -
Google search engine

Most Popular

Recent Comments